ಪೋಸ್ಟ್‌ಗಳು

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಇಮೇಜ್
ಘಟನೆ 1: ಅದು ಮಧ್ಯಾಹ್ನದ ಬಿಸಿಲು. ಊಟದ ಹೊತ್ತಾದ್ದರಿಂದ ಮಂಗಳೂರು ನಗರದ ಕಂಕನಾಡಿ ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳು ಸಾಲುಗಟ್ಟಿದ್ದವು. ವಾಹನ ಸವಾರರ ಮುಖದಲ್ಲಿ ಎಲ್ಲಿಗೋ ತಲುಪುವ ಧಾವಂತ, ಅನಿವಾರ್ಯವಾಗಿ ಕಾಯಬೇಕಾದಾಗ ಅಸಹನೆ ಕಾಣುತ್ತಿತ್ತು. ಬೆಳ್ಳಿ ಕೂದಲು ಹೊತ್ತ ಮುದಿಜೀವವೊಂದು ಪ್ರತಿ ವಾಹನದ ಬಳಿಯೂ ಬಂದು ಕೈಚಾಚುತ್ತಿತ್ತು. ಯಾರೂ ಕಾಸು ಬಿಚ್ಚುತ್ತಿರಲಿಲ್ಲ. ಅಷ್ಟರಲ್ಲಿ ನನ್ನ ಎದುರಿಗಿದ್ದ ದೊಡ್ಡ ಕಾರೊಂದರಲ್ಲಿದ್ದ ವ್ಯಕ್ತಿ ನಗುಮುಖದಲ್ಲೇ ಆ ಅಜ್ಜಿಗೆ ಒಂದು ನೋಟು ಕೈಗಿತ್ತರು. ಅಪರೂಪ ಎಂಬಂತೆ, ಕೆಲವು ನಿಮಿಷ ಪ್ರೀತಿಯಿಂದ ಮಾತನಾಡಿಸಿದರು. ಸಹಜವಾಗಿಯೇ ಅಜ್ಜಿಗೆ ಆಶ್ಚರ್ಯ, ಖುಷಿ. ಆಕೆಯದ್ದೋ ಹೊಟ್ಟೆ ಪಾಡು. ಆದರೆ ದುಡ್ಡು ಕೈಗಿತ್ತ ಆ ವ್ಯಕ್ತಿಯ ಮುಖದಲ್ಲಿ ಹೊಟ್ಟೆ ತುಂಬಿದಷ್ಟು ಸಂತೋಷ! ಘಟನೆ 2: ಅದೊಂದು ದೊಡ್ಡ ಮನೆ. ಯಾವುದಕ್ಕೂ ಕಡಿಮೆಯಿರಲಿಲ್ಲ. ಆದರೆ ಮನೆಯಲ್ಲಿದ್ದ ಇಳಿವಯಸ್ಸಿನ ವ್ಯಕ್ತಿಗೆ ಖಾಯಿಲೆಗಳು, ಮಾತ್ರೆಗಳೇ ಸ್ನೇಹಿತರಾಗಿದ್ದವು. ಅದಕ್ಕಾಗಿ ಅಡುಗೆ ಮನೆಗೆ ಹೋಗಿ ನೀರು ತೆಗೆದುಕೊಳ್ಳುವುದೇ ಅವರಿಗೊಂದು ಸಾಹಸ. ಅವತ್ತೂ ನಿಧಾನವಾಗಿ ಅಡುಗೆ ಮನೆಗೆ ಹೋಗುವ ಸಾಹಸ ಆರಂಭಿಸಿದರು. ಆಶ್ಚರ್ಯ! ಮುದ್ದಿನ ಮೊಮ್ಮಗಳು ನೀರು ತಂದು ಕೈಗಿತ್ತಳು. ನೀರು ಸಿಕ್ಕಿದೆ, ಅದೂ ಮೊಮ್ಮಗಳು ಕೊಟ್ಟಿದ್ದಾಳೆ. ಅಜ್ಜನಿಗೋ ಮಹದಾನಂದ. ಆ ಮುದ್ದು ಮಗುವಿನ ಮುಖದಲ್ಲಿ ಅದೆಂತದ್ದೋ ಸಂತೋಷ. ಅದು ಚಾಕಲೇಟು ಕೈಗಿತ್ತರೂ ಕಾಣದು. ...

ಬೇಸರದಲ್ಲಿ ಬರೆದದ್ದು…ಹೌದಾ?!

ಇಮೇಜ್
ಬೇಸರದಲ್ಲಿ ಬರೆದದ್ದೇ? ಬರೆದು ಬೇಸರವಾಯಿತೆ… ಹೌದಲ್ಲಾ… ತಿಳಿಯುತ್ತಿಲ್ಲ.   ಆಕೆ ನೆನಪಾಗಿ ಕುಗ್ಗಿದೆನೇ? ಕುಗ್ಗಿದಾಗ ಆಕೆಯೇ ನೆನಪಾದಳೇ… ಹೌದಲ್ಲಾ..ಅದೂ ಇರಬಹುದಲ್ಲಾ!   ದುಡಿದು ದಣಿದೆನೇ? ದಣಿದಾಗ…ದುಡಿಯಬೇಕಲ್ಲಾ ಅನಿಸಿತೇ? ಹೌದಲ್ಲಾ..ಹಾಗೂ ಅನ್ನಿಸಿರಬಹುದಲ್ಲಾ!   ನೊಂದಾಗ ದೇವರು ನೆನಪಾದನೇ? ದೇವರ ನೆನೆಸಿಕೊಂಡು ನೊಂದೆನೇ… ಹೌದಲ್ಲಾ.. ಅದೇ ಆಗಿರಬೇಕಲ್ಲಾ!   ಒಂಟಿಯಾದಾಗ ಭಯವಾಯಿತೇ? ಭಯವಾದಾಗ ಒಂಟಿ ಅನಿಸಿತೇ… ಹೌದಲ್ಲಾ ಯೋಚನೆ ಸರಿಯಾಗಿದೆಯಲ್ಲಾ!   ಆಸೆಪಟ್ಟು ನಿರಾಶನಾದೆನೇ? ನಿರಾಶನಾಗಿ ಆಸೆಪಟ್ಟೆನೇ.. ಹೌದೌದು ಹಾಗೇ ಆಗಿರಬೇಕಲ್ಲಾ!   ಯಾರದೋ ಮಾತು ಚುಚ್ಚಿತೇ? ಮನಸ್ಸಿಗೆ ನೋವಾದಾಗ ಮಾತು ನೆನಪಾಯಿತೆ… ಹೌದು ಅದು ಸರಿಯಲ್ಲಾ!   ದೇವರ ನೆನೆಯದೇ ಕಷ್ಟ ಬಂತೇ? ಕಷ್ಟ ಬಂದಾಗ ದೇವರ ನೆನಪಾಯಿತೇ… ಹೌದಲ್ಲಾ ಆದರೆ ಇನ್ನೂ ತಿಳಿಯುತ್ತಿಲ್ಲ!   ಮೊದಲಿಲ್ಲ ಕೊನೆಯಿಲ್ಲ…ಇಲ್ಲಿ ಹಾಗೇ ಎಲ್ಲಾ ನಾನ್ಯಾರೋ ನೀನ್ಯಾರೋ ಗೊತ್ತಿಲ್ಲ ಹಿಂದೇನು ಮುಂದೇನು ತಿಳಿದಿಲ್ಲ ಎಲ್ಲವೂ ಗೊಂದಲ… ಆದರೂ ಜೀವನ ಬಲು ಸುಂದರ!   ಜಿಪಿ  

ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!

ಇಮೇಜ್
  ಟೈಮ್ ‌ ಹೋಗೋದೇ ಗೊತ್ತಾಗಲ್ಲ , ಅನ್ನುತ್ತಲೇ ವರ್ಷದ ಕೊನೆಗೆ ಬಂದು ನಿಂತಿದ್ದೇವೆ .! ಕಷ್ಟವೋ ಸುಖವೋ , ನಗುವೋ ಅಳುವೋ , ಹುಟ್ಟೋ ಸಾವೋ ಏನೇ ಆದರೂ ಈ ಕಾಲವನ್ನು ತಡೆಯೋರು ಯಾರೂ ಇಲ್ಲ ನೋಡಿ … ಇದೊಂಥರಾ ಸಿನಿಮಾದಂತೆ . ಕಥೆ ನಾವು ಬರೆದಿಲ್ಲ . ನಿರ್ದೇಶನವೂ ನಮ್ಮದಲ್ಲ . ಅದರ ಮೇಲೆ ಯಾವ ನಿಯಂತ್ರಣವೂ ಇಲ್ಲ . ಆದ್ರೂ ಸಿನಿಮಾ ಚೆನ್ನಾಗಿರ್ಬೋದು ಅನ್ನೋ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ‌ ಗೆ ಹೋಗ್ತೇವೆ . ಕೊನೆಗೆ ಸಕತ್ತಾಗಿದೇ ಅಂತಾನೋ , ಡಬ್ಬಾ ಮೂವೀ ಅಂತಾನೋ , ಕೆಲವೊಂದ್ಸಲ ಪರ್ವಾಗಿಲ್ಲ ಅಂತಾನೋ ಅಂದ್ಕೋತೀವಿ . ಅಂತೂ ಸಿನಿಮಾ ಮುಗೀಲೇ ಬೇಕು , ನಾವು ಮನೆಗೆ ವಾಪಸ್ ‌ ಬರ್ಲೇಬೇಕು . ನಿರೀಕ್ಷೆ ಅನ್ನೋದು ಎಲ್ಲರನ್ನೂ ಆಟಾಡ್ಸುತ್ತೆ . ಸಿಹಿಯ , ಗೆಲುವಿನ , ಖುಷಿಯ , ಸುಖದ ನಿರೀಕ್ಷೆ . ಎಂತಾ ಸೋಲಿನಲ್ಲೂ , ಎಂತಾ ಗೆಲುವಿನಲ್ಲೂ ಭವಿಷ್ಯದ ನಿರೀಕ್ಷೆ ಇದ್ದೇ ಇರುತ್ತೆ . ಇರ್ಲೇಬೇಕು . ಇಲ್ಲದಿದ್ದರೆ ಅದೇ ಅಂತ್ಯ . ನಮ್ಮ ಹುಟ್ಟಿದ ಹಬ್ಬವೋ , ಹೊಸ ವರ್ಷವೋ ವಿಶೇಷವಾಗೋದು ಇದಕ್ಕೇ . ಈ ವರ್ಷ ಹೇಗಿತ್ತು ಎಂಬ ಯೋಚನೆಯೊಂದಿಗೆ , ಹೊಸ ವರ್ಷ ಹೇಗಿರಬೇಕು ಎಂಬ ಮತ್ತದೇ ನಿರೀಕ್ಷೆ . ಇದನ್ನು ಕುತೂಹಲ , ಅಶಾಭಾವ ಏನಾದರೂ ಅನ್ನಿ . ಹೊಸ ವರ್ಷಕ್ಕೆ ಯೋಜನೆ ಬೇಕಾ ? ಯೋಜನೆಯಿಲ್ಲದಿದ್ದರೆ ನಮ್ಮ ಜೀವನ ಅದೃಷ್ಟವನ್ನೇ ಅವಲಂಬಿಸಿರುತ್ತದೆ . ಹಗ್ಗದ ಮೇಲಿನ ನಡಿಗೆಗಿಂತ   ಮುಳ್ಳಿನ ದಾರಿಯೇ ಆದೀತಲ್ಲವೇ ? ಹೊಸ ವರ್ಷದಲ್ಲಿ ...

ನೆಟ್‌- ಒಂದು ಪರೀಕ್ಷೆ, ಹಲವು ಪ್ರಯೋಜನಗಳು

ಇಮೇಜ್
ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌) ಯನ್ನು ಭಾರತೀಯ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಲ್ಲಿ ʼಸಹಾಯಕ ಪ್ರಾಧ್ಯಾಪಕʼ ಮತ್ತು ʼಜೂನಿಯರ್‌ ರಿಸರ್ಚ್‌ ಫೆಲೋಶಿಪ್ ಮತ್ತು ಸಹಾಯಕ ಪ್ರಾಧ್ಯಾಪಕ' ಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ನಡೆಸಲಾಗುತ್ತದೆ.  ಯುಜಿಸಿ- ನೆಟ್‌ ಪರೀಕ್ಷೆಯನ್ನು ವರ್ಷದಲ್ಲಿ ಎರಡು ಬಾರಿ (ಜೂನ್‌ ಮತ್ತು ಡಿಸೆಂಬರ್‌) ನಡೆಸಲಾಗುತ್ತದೆ. 2018 ರವರೆಗೆ ನೆಟ್‌ ಪರೀಕ್ಷೆಯಲ್ಲಿ ಅಭ್ಯರ್ಥಿ ಮೂರು ಪೇಪರ್‌ಗಳಿಗೆ ಉತ್ತರಿಸಬೇಕಾಗಿತ್ತು. 2019 ರ ನಂತರ ಅದನ್ನು ಎರಡು ಪೇಪರ್‌ ಮಾಡಲಾಗಿದೆ. ಪರೀಕ್ಷೆಯಲ್ಲಿ ಎರಡೂ ಪೇಪರ್‌ಗಳು ವಸ್ತು ನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.  ನೆಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಡಿಸೆಂಬರ್ 2018 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್ನಲ್ಲಿ ನಡೆಸುತ್ತಿದೆ. ಎರಡು ಪರೀಕ್ಷೆಗಳನ್ನು ಮೂರು ಗಂಟೆಗಳ ಕಾಲ ನಡೆಸಲಾಗುತ್ತದೆ. ಪೇಪರ್‌ -1 ಮತ್ತು ಪೇಪರ್‌-2 ರ ನಡುವೆ ಯಾವುದೇ ವಿರಾಮ ಇರುವುದಿಲ್ಲ. ಮೂರು ಗಂಟೆಗಳ ಕಾಲ ಸತತವಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.  ಪೇಪರ್‌ -1 ಎಲ್ಲಾ ಅಭ್ಯರ್ಥಿಗಳಿಗೂ ಈ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಪೇಪರ್-1 ರಲ್ಲಿ ಸಾಮನ್ಯ ಜ್ಞಾನದ ಬಗ್ಗೆ ಹೆಚ್ಚು ಪ್ರಶ್ನೆಗಳನ್ನ ಕೇಳಲಾಗುತ್ತದೆ. ಅಭ್ಯರ್ಥಿಯ ಚಿಂತನೆ, ತಾರ್ಕಿಕತ...

ಐಎಎಸ್ ಯಶಸ್ಸು ಅಸಾಧ್ಯವಲ್ಲ

ಇಮೇಜ್
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆಯೇನೋ ಹಲವರಿಗಿರುತ್ತದೆ. ಆದರೆ ಇವರಲ್ಲಿ ಗುರಿ ತಲುಪುವವರು ಕೆಲವರಷ್ಟೇ. ಉಳಿದವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಅಸಾಧ್ಯ ಎಂದು ತಮ್ಮ ಮಹದಾಸೆಯನ್ನು ಕೈಯಾರೆ ಚಿವುಟಿಬಿಡುತ್ತಾರೆ. ಹಾಗಾದರೆ ಯುಪಿಎಸ್ಸಿ ಪರೀಕ್ಷೆ ಅಷ್ಟೊಂದು ಕಷ್ಟವೇ? ಇದಕ್ಕೆ ಏಕೆ ಇಷ್ಟೊಂದು ಮಹತ್ವ? ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾವು ಮಾಡಬೇಕಿರುವುದೇನು? ವಯೋಮಿತಿ, ವಿದ್ಯಾರ್ಹತೆ ಮೊದಲಾದ ಸಂಗತಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ವರ್ಷಕ್ಕೆ ಒಂದು ಬಾರಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯೇ ಐಎಎಸ್‌ ಪರೀಕ್ಷೆ ಎಂದು ಜನಪ್ರಿಯವಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗುವ ಅಭ್ಯರ್ಥಿಗಳು ಐಎಎಸ್, ಐಪಿಎಸ್, ಐಆರ್‌ಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಾಗಿ ನಾಗರೀಕ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ.  ವಿದ್ಯಾರ್ಹತೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ ಅಥವಾ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯ ಅಥವಾ ಸಂಯೋಜನೆಯಲ್ಲಿ ಪದವಿ ಪಡೆದಿರಬೇಕು. ಐಎಎಸ್‌ ಅಧಿಕಾರಿಯಾಗಲು ಆಯೋಗ ಪ್ರತಿ ವರ್ಷ ನಡೆಸುವ ನಾಗರೀಕ ಸೇವಾ ಪರೀಕ್ಷೆ (ಸಿಎಸ್‌ಇ) ಯಲ್ಲಿ ಉತ್ತೀರ್ಣರಾಗುವುದು ಕಡ್...

ಸರಳ ಬದುಕು … ಜೀವನ ಬಲುಸುಂದರ

ಇಮೇಜ್
"ನಾವು ಜೀವನವನ್ನು ಎಷ್ಟು ಸರಳಗೊಳಿಸಿಕೊಳ್ಳುತ್ತೇವೆಯೋ ಅಷ್ಟು ಲೋಕದ ನಿಯಮಗಳು ಕಡಿಮೆ ಸಂಕೀರ್ಣ ಎಂದೆನಿಸುತ್ತವೆ." - ಹೆನ್ರಿ ಡೇವಿಡ್ ಥೋರೋ ಬದುಕಿನ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಸಾಮಾನ್ಯ ಅರ್ಥದಲ್ಲಿ ಅದನ್ನು ಅತಿಮಾನುಶ ಶಕ್ತಿಯೊಂದು ನಮಗೆ ನೀಡುವ ಉಡುಗೊರೆ ಎನ್ನಬಹುದೇನೋ. ಜೇಡಿ ಮಣ್ಣಿನಂತಾದ್ದು. ಅದನ್ನು ಮೂರ್ತಿಯಾಗಿಸುವುದು ಅಥವಾ ಕೆಸರಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.  ಬದುಕು ಕಷ್ಟವೇ? ಬದುಕು ಅಥವಾ ಜೀವನದ ಬಗ್ಗೆ ಮಾತನಾಡುವಾಗ ಅದು ಅಂದುಕೊಂಡಂತಲ್ಲಾ, ಕಷ್ಟಗಳು ಬರುತ್ತವೆ ಎಂದೆಲ್ಲಾ ಮಾತನಾಡುತ್ತೇವೆ.  ಹಾಗಾದರೆ ಜೀವನವೆಂಬುದು ಅಷ್ಟೊಂದು ಕಷ್ಟವಾ? ಕತ್ತಲು ಬೆಳಕು ಬರುವಂತೆ, ಬೇಸಿಗೆ ಮುಗಿದು ಮಳೆಗಾಲ ಬರುವಂತೆ ಇದೂ ಕೂಡ. ಇಲ್ಲಿಯೂ ಕಷ್ಟಗಳ ನಂತರ ಸುಖವೂ ಇದೆ, ಸೋಲುಗಳ ನಂತರ ಗೆಲುವಿನ ನಗುವೂ ಇರುತ್ತದೆಯಲ್ಲವೇ?  ಬಹುಶಃ ಬದುಕು ಎಂದ ಕೂಡಲೇ ಕಷ್ಟಗಳ ಬಗ್ಗೆ ಮಾತನಾಡಲೂ ಒಂದು ಕಾರಣವಿರಬಹುದು. ಅದು ವ್ಯಕ್ತಿಯೊಬ್ಬನನ್ನು ಅಥವಾ ಮಕ್ಕಳನ್ನು ಮುಂದೆ ಬರಬಹುದಾದ ಸಂಕಷ್ಟಗಳಿಗೆ ಮಾನಸಿಕವಾಗಿ ಸಿದ್ಧಪಡಿಸುವುದು. ಅಪ್ಪ-ಅಮ್ಮನ ಮುದ್ದು, ತುಂಟಾಟದ ಬಾಲ್ಯದಿಂದ ಬದಲಾಗುವ ಬದುಕಿನ ಸೂಚನೆ ಕೊಡುವುದು.  ಆದರೂ ಒಮ್ಮೊಮ್ಮೆ ನಾವು ನಮ್ಮ ನೀವನವನ್ನು ಕಷ್ಟಗಳ ಸಂಕೋಲೆ ಎಂಬ ಭ್ರಮೆಯಲ್ಲೇ ಬದುಕುತ್ತೇವೆ… ಅರ್ಥಾತ್‌ ಜೇಡಿ ಮಣ್ಣಿನ ಉಂಡೆಯನ್ನು ಮೂರ್ತಿಯಾಗಿಸುವ ಬದಲು ಕೆಸರು ಮಾಡಿ...

ಹೆಮ್ಮೆ, ಭಾವನಾತ್ಮಕ ಕ್ಷಣಗಳ ಸಮ್ಮಿಲನ ಭಾರತೀಯ ಸೇನಾ ದಿನ

ಇಮೇಜ್
ದೇಶ ಕಾಯುವ ಯೋಧ, ಹೊಟ್ಟೆ ತುಂಬಿಸುವ ರೈತ ಯಾವತ್ತೂ ನಮ್ಮ ಆಸ್ತಿ… ನಿಸ್ವಾರ್ಥ ಯೋಧರ ಮಾತು ಬಂದಾಗ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವವರು ನಮ್ಮ ನಾಡಿದ ಹೆಮ್ಮೆಯ ಯೋಧ, ಭಾರತೀಯ ಸೇನೆಯ ಮೊದಲ ಕಮಾಂಡರ್‌ ಇನ್‌ ಚೀಫ್‌ ಕೋದಂಡೇರ ಮಾಡಪ್ಪ ಕಾರ್ಯಪ್ಪ (ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ). ಕೊಡಗಿನ ಶನಿವಾರಸಂತೆಯ ಕಾರ್ಯಪ್ಪನವರು ಹುದ್ದೆಯನ್ನು ʼಅಲಂಕರಿಸಲಿಲ್ಲʼ, ಬದಲಾಗಿ ಆ ಹುದ್ದೆಗೆ ಘನತೆ, ಗೌರವ ತಂದುಕೊಟ್ಟರು. ಅವರಿಂದ ಪ್ರೇರಣೆ ಪಡೆದು ಈಗಲು ಯುವಕರು ಸೇನೆ ಸೇರುತ್ತಿದ್ದಾರೆ ಎಂದರೆ ಅವರ ಪ್ರಭಾವ ಎಷ್ಟಿದೆಯೆಂದು ನಾವೇ ಅಂದಾಜಿಸಬಹುದು.   ಕಾರ್ಯಪ್ಪನವರನ್ನು ಜನವರಿ 15, 1949 ರಲ್ಲಿ ಭಾರತದ ಮೊದಲ ಕಮಾಂಡರ್‌ ಇನ್‌ ಚೀಫ್‌ ಎಂದು ಘೋಷಿಸಲಾಯಿತು. ಅವರು ಬ್ರಿಟಿಷ್‌ ಕಮಾಂಡಿಂಗ್‌ ಜನರಲ್‌ ಸರ್‌ ಫ್ರಾನ್ಸಿಸ್‌ ಬಟ್ಟರ್‌ ಅವರ ಸ್ಥಾನವನ್ನು ತುಂಬಬೇಕಿತ್ತು. ಇದರೊಂದಿಗೆ ದೊಡ್ಡ ಜವಾಬ್ದಾರಿಯೊಂದು ಅವರ ಹೆಗಲೇರಿತ್ತು. ಸ್ವಾತಂತ್ರ್ಯಾ ನಂತರ ಬ್ರಿಟಿಷರು ಬಿಟ್ಟು ಹೋದ ಭಸೇನೆಯನ್ನು ಅವರು ಸಂಪೂರ್ಣವಾಗಿ ಭಾರತೀಯ ಸೇನೆಯಾಗಿ ಬದಲಾಯಿಸಬೇಕಿತ್ತು. ಈ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿದ ಕಾರ್ಯಪ್ಪ ಗಾರ್ಡ್ ಬ್ರಿಗೇಡ್ (1949. 1958 ರಿಂದ ಗಾರ್ಡ್ಸ್ ಬ್ರಿಗೇಡ್) ಮತ್ತು ಪ್ಯಾರಾಚೂಟ್ ರೆಜಿಮೆಂಟ್ (1952) ಎಂಬ ಎರಡು ಹೊಸ ಘಟಕಗಳನ್ನು ಸ್ಥಾಪಿಸಿದರು. ಸೇನೆಯಲ್ಲಿ ಎಲ್ಲಾ ಜಾತಿ, ಸಮುದಾಯಗಳಿಗೆ ಅವಕಾಶ ನೀಡಿದ ಕಾರ್ಯಪ್ಪ ಅಪಾರ ಮೆ...