ಪೋಸ್ಟ್‌ಗಳು

ನಾನು….ಆಗಿದ್ದೆ!

ಇಮೇಜ್
ನಾನು ಕೈಯೊಳ ಹೂವಾಗಿದ್ದೆ ಎಲ್ಲರ ಕನಸಿನ ಕೂಸಾಗಿದ್ದೆ , ಅದೆಷ್ಟೊ ಮುದ್ದಾದ ಹೆಸರು ಪಡೆದಿದ್ದೆ ಹೌದು…ನಾನು ಹಾಗಿದ್ದೆ!   ಎಷ್ಟೊಂದು ಚೆಂದವಾಗಿದ್ದೆ ಕೆಂಪು ಅಂಗಿಯೊಳು ಕನಸ ಕಂಡಿದ್ದೆ ಹಾಡಿದ್ದೆ , ಆಡಿದ್ದೆ , ಎಲ್ಲರನು ಕಾಡಿದ್ದೆ ಹೌದು ಮೊದಮೊದಲು ಹಾಗಿದ್ದೆ!   ಬೆಳೆದಿದ್ದೆ , ಮೊಳಕೆಯೊಳು ಒಂಚೂರು ಬಳಲಿದ್ದೆ ಕಾದಿದ್ದೆ , ಕತ್ತಲೊಳು ಕಣ್ಣೀರ ಸುರಿಸಿದ್ದೆ ಕಾಲದಲ್ಲಿ ಲೀನವಾಗಬೇಕೆಂದಿದ್ದೆ ಹೌದು ನಾನು ಹಾಗೂ ಇದ್ದೆ!   ಅತ್ತರೂ , ಹುಚ್ಚು ಕನಸ ಕಂಡಿದ್ದೆ    ಆದರೂ ಗೊತ್ತಿಲ್ಲದೇ ಖಾಲಿಯಾಗಿದ್ದೆ! ಏನೋ ಆಗಬೇಕೆಂದಿದ್ದೆ , ದಾರಿ ಹುಡುಕಿದ್ದೆ ಹೌದು ನಾನು ಆಗ ಹಾಗಿದ್ದೆ!   ಹಾ…ನಾನು ನಗುವಿನರಸನಾಗಿದ್ದೆ ಹೇಗೆ ಬಂತೋ ಆ ನಗು ತಿಳಿಯದಾಗಿದ್ದೆ ಮುಗ್ಧನೋ , ಮೂರ್ಖನೋ ಆಗಿದ್ದೆ! ಹೌದು ನಾನು ಹೇಗೇಗೋ ಇದ್ದೆ!   ಹೌದೌದು , ನಾನು ಅದೃಷ್ಟವಂತನಾಗಿದ್ದೆ ನಿಜಪ್ರೀತಿಯಲಿ ಗೆದ್ದಿದ್ದೆ , ನಲ್ಲೆಯನು , ಎಲ್ಲವನೂ ಪಡೆದಿದ್ದೆ ಎಷ್ಟೊಂದು ಅದೆಷ್ಟೊಂದು ಖುಷಿಯಾಗಿದ್ದೆ!   ಬದುಕ ಬಲ್ಲವನಾಗಿದ್ದೆ… ಆದರೆ ತೂತು ಬಲೂನಿನಂತಿದ್ದೆ , ಎಷ್ಟೆಂದು ಗಾಳಿ ತುಂಬಿಸಲಿ ಊದಿದ್ದೆ , ಒಳಗೊಳಗೆ ಖಾಲಿಯಾಗುತ್ತಲೇ ಇದ್ದೆ ಹೌದು ನಾನು ಹಾಗಾದೆ!   ಎಲ್ಲಾ ಉಳ್ಳವನಲ್ಲಾ ನಾನು , ಆಗಸಕೇ ಏರುತಲಿದ್ದೆ ಮರೆತಿದ್ದೆ , ಹೌದು ಮರೆತೇ ಹೋಗುತಲಿದ್ದೆ ಬಹಳ ದೂರ ಬಂದಿದ್ದೆ , ಆದರೆ ಒಬ್ಬನೇ ಸಾಗಲಾರಂಬಿಸಿದೆ ಹಾ , ಹೌದು ...

ಎಮೋಜಿ : ಸಂಸ್ಕೃತಿಗಳಾಚೆಗೆ ಹೃದಯಗಳನ್ನು ಬೆಸೆಯುವ ಸಾರ್ವತ್ರಿಕ ಭಾಷೆ

ಇಮೇಜ್
ಪ್ರೀತಿ, ಕೋಪ, ಸಂತೋಷ, ದುಃಖ, ದ್ವೇಷ, ಅಸೂಯೆ… ಹೀಗೆ ಮನುಷ್ಯ ಜೀವನದಲ್ಲಿ ಈ ಭಾವನೆಗಳು ನಿರ್ವಹಿಸುವ ಪಾತ್ರ ತುಂಬಾ ದೊಡ್ಡದು. ವಿವಿಧ ಹಂತಗಳಲ್ಲಿ ಮನಸ್ಸಲ್ಲಿ ಮೂಡುವ ಭಾವನೆಗಳು ಮತ್ತು ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿ ನಿರ್ಣಾಯಕವಾಗಿರುತ್ತದೆ. ನಮ್ಮಲ್ಲಿ ಹಲವರು ಭಾವನೆಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಪಡಿಸುವ ವಿಧಾನ ಕಂಡುಕೊಂಡಿರುತ್ತೇವೆ. ನಗು- ಅಳು, ಮಾತು-ಮೌನ….ಹೀಗೆ. ಕೆಲವೊಮ್ಮೆ ಭಾವನೆಗಳನ್ನು ಹುದುಗಿಟ್ಟುಕೊಂಡು ಸಂಕಟಪಡುವುದೂ ಇದೆ!     ಈ ವೇಗದ ಡಿಜಿಟಲ್ ಯುಗದಲ್ಲಿ ಯಾವುದಕ್ಕೂ ಸಮಯ ಕಡಿಮೆ. ಭಾವನೆಗಳನ್ನು ವ್ಯಕ್ತಪಡಿಸುವುದು, ಅದಕ್ಕೆ ಸ್ಪಂದಿಸುವುದು ಎಲ್ಲವೂ ಅರ್ಜೆಂಟಾಗಿ ಆಗಬೇಕು! ಇನ್ನೊಂದು ಪ್ರಮುಖ ವಿಷಯವೆಂದರೆ ಜಗತ್ತೇ ಒಂದು ಹಳ್ಳಿಯಾಗುತ್ತಿರುವಾಗ, ನಮ್ಮ ಭಾವನೆ ಭಾಷೆ, ಗಡಿಗಳ ಮಿತಿಗಳನ್ನು ದಾಟಿ ಎಲ್ಲರಿಗೂ ಅರ್ಥವಾಗಬೇಕು. ಹೀಗಿರುವಾಗ , ಎರಡು ಚುಕ್ಕೆಗಳು ಮತ್ತು ಕೆಳಕ್ಕೆ ಬಾಗಿರುವ ಒಂದು ರೇಖೆ ಯಿರುವ ಸರಳ ಹಳದಿ ವೃತ್ತ ವೂ ಭಾವನೆಗಳನ್ನು ವ್ಯಕ್ತಪಡಿಸಬಲ್ಲದು. ಮಾತಿನಲ್ಲಿ ಹೇಳಲಾಗದ ಭಾವನೆಯನ್ನೂ ಕೂಡ… ಅದಕ್ಕಾಗಿ ಈ ಎಮೋಜಿಗಳಿಗೂ ಒಂದು ದಿನವಿದೆ. ಪ್ರತಿ ಜುಲೈ 17 ರಂದು , ವಿ ಶ್ವ ಎಮೋಜಿ ದಿನವನ್ನು ಆಚರಿಸ ಲಾಗುತ್ತದೆ.  ಮಾನವ ಸಂವಹನ ದಲ್ಲಿ ಹೊಸ ಕ್ರಾಂತಿ ಗೆ ಕಾರಣವಾದ ಈ ಕಿರು ಕಲಾಕೃತಿಗಳು ಭಾವನೆಗಳ ಸಾರ್ವತ್ರಿಕ ಭಾಷೆಯಾಗಿವೆ . ಉದಾಹರಣೆಗೆ, ಯಾವುದಾದರೂ...

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಇಮೇಜ್
ಘಟನೆ 1: ಅದು ಮಧ್ಯಾಹ್ನದ ಬಿಸಿಲು. ಊಟದ ಹೊತ್ತಾದ್ದರಿಂದ ಮಂಗಳೂರು ನಗರದ ಕಂಕನಾಡಿ ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳು ಸಾಲುಗಟ್ಟಿದ್ದವು. ವಾಹನ ಸವಾರರ ಮುಖದಲ್ಲಿ ಎಲ್ಲಿಗೋ ತಲುಪುವ ಧಾವಂತ, ಅನಿವಾರ್ಯವಾಗಿ ಕಾಯಬೇಕಾದಾಗ ಅಸಹನೆ ಕಾಣುತ್ತಿತ್ತು. ಬೆಳ್ಳಿ ಕೂದಲು ಹೊತ್ತ ಮುದಿಜೀವವೊಂದು ಪ್ರತಿ ವಾಹನದ ಬಳಿಯೂ ಬಂದು ಕೈಚಾಚುತ್ತಿತ್ತು. ಯಾರೂ ಕಾಸು ಬಿಚ್ಚುತ್ತಿರಲಿಲ್ಲ. ಅಷ್ಟರಲ್ಲಿ ನನ್ನ ಎದುರಿಗಿದ್ದ ದೊಡ್ಡ ಕಾರೊಂದರಲ್ಲಿದ್ದ ವ್ಯಕ್ತಿ ನಗುಮುಖದಲ್ಲೇ ಆ ಅಜ್ಜಿಗೆ ಒಂದು ನೋಟು ಕೈಗಿತ್ತರು. ಅಪರೂಪ ಎಂಬಂತೆ, ಕೆಲವು ನಿಮಿಷ ಪ್ರೀತಿಯಿಂದ ಮಾತನಾಡಿಸಿದರು. ಸಹಜವಾಗಿಯೇ ಅಜ್ಜಿಗೆ ಆಶ್ಚರ್ಯ, ಖುಷಿ. ಆಕೆಯದ್ದೋ ಹೊಟ್ಟೆ ಪಾಡು. ಆದರೆ ದುಡ್ಡು ಕೈಗಿತ್ತ ಆ ವ್ಯಕ್ತಿಯ ಮುಖದಲ್ಲಿ ಹೊಟ್ಟೆ ತುಂಬಿದಷ್ಟು ಸಂತೋಷ! ಘಟನೆ 2: ಅದೊಂದು ದೊಡ್ಡ ಮನೆ. ಯಾವುದಕ್ಕೂ ಕಡಿಮೆಯಿರಲಿಲ್ಲ. ಆದರೆ ಮನೆಯಲ್ಲಿದ್ದ ಇಳಿವಯಸ್ಸಿನ ವ್ಯಕ್ತಿಗೆ ಖಾಯಿಲೆಗಳು, ಮಾತ್ರೆಗಳೇ ಸ್ನೇಹಿತರಾಗಿದ್ದವು. ಅದಕ್ಕಾಗಿ ಅಡುಗೆ ಮನೆಗೆ ಹೋಗಿ ನೀರು ತೆಗೆದುಕೊಳ್ಳುವುದೇ ಅವರಿಗೊಂದು ಸಾಹಸ. ಅವತ್ತೂ ನಿಧಾನವಾಗಿ ಅಡುಗೆ ಮನೆಗೆ ಹೋಗುವ ಸಾಹಸ ಆರಂಭಿಸಿದರು. ಆಶ್ಚರ್ಯ! ಮುದ್ದಿನ ಮೊಮ್ಮಗಳು ನೀರು ತಂದು ಕೈಗಿತ್ತಳು. ನೀರು ಸಿಕ್ಕಿದೆ, ಅದೂ ಮೊಮ್ಮಗಳು ಕೊಟ್ಟಿದ್ದಾಳೆ. ಅಜ್ಜನಿಗೋ ಮಹದಾನಂದ. ಆ ಮುದ್ದು ಮಗುವಿನ ಮುಖದಲ್ಲಿ ಅದೆಂತದ್ದೋ ಸಂತೋಷ. ಅದು ಚಾಕಲೇಟು ಕೈಗಿತ್ತರೂ ಕಾಣದು. ...

ಬೇಸರದಲ್ಲಿ ಬರೆದದ್ದು…ಹೌದಾ?!

ಇಮೇಜ್
ಬೇಸರದಲ್ಲಿ ಬರೆದದ್ದೇ? ಬರೆದು ಬೇಸರವಾಯಿತೆ… ಹೌದಲ್ಲಾ… ತಿಳಿಯುತ್ತಿಲ್ಲ.   ಆಕೆ ನೆನಪಾಗಿ ಕುಗ್ಗಿದೆನೇ? ಕುಗ್ಗಿದಾಗ ಆಕೆಯೇ ನೆನಪಾದಳೇ… ಹೌದಲ್ಲಾ..ಅದೂ ಇರಬಹುದಲ್ಲಾ!   ದುಡಿದು ದಣಿದೆನೇ? ದಣಿದಾಗ…ದುಡಿಯಬೇಕಲ್ಲಾ ಅನಿಸಿತೇ? ಹೌದಲ್ಲಾ..ಹಾಗೂ ಅನ್ನಿಸಿರಬಹುದಲ್ಲಾ!   ನೊಂದಾಗ ದೇವರು ನೆನಪಾದನೇ? ದೇವರ ನೆನೆಸಿಕೊಂಡು ನೊಂದೆನೇ… ಹೌದಲ್ಲಾ.. ಅದೇ ಆಗಿರಬೇಕಲ್ಲಾ!   ಒಂಟಿಯಾದಾಗ ಭಯವಾಯಿತೇ? ಭಯವಾದಾಗ ಒಂಟಿ ಅನಿಸಿತೇ… ಹೌದಲ್ಲಾ ಯೋಚನೆ ಸರಿಯಾಗಿದೆಯಲ್ಲಾ!   ಆಸೆಪಟ್ಟು ನಿರಾಶನಾದೆನೇ? ನಿರಾಶನಾಗಿ ಆಸೆಪಟ್ಟೆನೇ.. ಹೌದೌದು ಹಾಗೇ ಆಗಿರಬೇಕಲ್ಲಾ!   ಯಾರದೋ ಮಾತು ಚುಚ್ಚಿತೇ? ಮನಸ್ಸಿಗೆ ನೋವಾದಾಗ ಮಾತು ನೆನಪಾಯಿತೆ… ಹೌದು ಅದು ಸರಿಯಲ್ಲಾ!   ದೇವರ ನೆನೆಯದೇ ಕಷ್ಟ ಬಂತೇ? ಕಷ್ಟ ಬಂದಾಗ ದೇವರ ನೆನಪಾಯಿತೇ… ಹೌದಲ್ಲಾ ಆದರೆ ಇನ್ನೂ ತಿಳಿಯುತ್ತಿಲ್ಲ!   ಮೊದಲಿಲ್ಲ ಕೊನೆಯಿಲ್ಲ…ಇಲ್ಲಿ ಹಾಗೇ ಎಲ್ಲಾ ನಾನ್ಯಾರೋ ನೀನ್ಯಾರೋ ಗೊತ್ತಿಲ್ಲ ಹಿಂದೇನು ಮುಂದೇನು ತಿಳಿದಿಲ್ಲ ಎಲ್ಲವೂ ಗೊಂದಲ… ಆದರೂ ಜೀವನ ಬಲು ಸುಂದರ!   ಜಿಪಿ  

ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!

ಇಮೇಜ್
  ಟೈಮ್ ‌ ಹೋಗೋದೇ ಗೊತ್ತಾಗಲ್ಲ , ಅನ್ನುತ್ತಲೇ ವರ್ಷದ ಕೊನೆಗೆ ಬಂದು ನಿಂತಿದ್ದೇವೆ .! ಕಷ್ಟವೋ ಸುಖವೋ , ನಗುವೋ ಅಳುವೋ , ಹುಟ್ಟೋ ಸಾವೋ ಏನೇ ಆದರೂ ಈ ಕಾಲವನ್ನು ತಡೆಯೋರು ಯಾರೂ ಇಲ್ಲ ನೋಡಿ … ಇದೊಂಥರಾ ಸಿನಿಮಾದಂತೆ . ಕಥೆ ನಾವು ಬರೆದಿಲ್ಲ . ನಿರ್ದೇಶನವೂ ನಮ್ಮದಲ್ಲ . ಅದರ ಮೇಲೆ ಯಾವ ನಿಯಂತ್ರಣವೂ ಇಲ್ಲ . ಆದ್ರೂ ಸಿನಿಮಾ ಚೆನ್ನಾಗಿರ್ಬೋದು ಅನ್ನೋ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ‌ ಗೆ ಹೋಗ್ತೇವೆ . ಕೊನೆಗೆ ಸಕತ್ತಾಗಿದೇ ಅಂತಾನೋ , ಡಬ್ಬಾ ಮೂವೀ ಅಂತಾನೋ , ಕೆಲವೊಂದ್ಸಲ ಪರ್ವಾಗಿಲ್ಲ ಅಂತಾನೋ ಅಂದ್ಕೋತೀವಿ . ಅಂತೂ ಸಿನಿಮಾ ಮುಗೀಲೇ ಬೇಕು , ನಾವು ಮನೆಗೆ ವಾಪಸ್ ‌ ಬರ್ಲೇಬೇಕು . ನಿರೀಕ್ಷೆ ಅನ್ನೋದು ಎಲ್ಲರನ್ನೂ ಆಟಾಡ್ಸುತ್ತೆ . ಸಿಹಿಯ , ಗೆಲುವಿನ , ಖುಷಿಯ , ಸುಖದ ನಿರೀಕ್ಷೆ . ಎಂತಾ ಸೋಲಿನಲ್ಲೂ , ಎಂತಾ ಗೆಲುವಿನಲ್ಲೂ ಭವಿಷ್ಯದ ನಿರೀಕ್ಷೆ ಇದ್ದೇ ಇರುತ್ತೆ . ಇರ್ಲೇಬೇಕು . ಇಲ್ಲದಿದ್ದರೆ ಅದೇ ಅಂತ್ಯ . ನಮ್ಮ ಹುಟ್ಟಿದ ಹಬ್ಬವೋ , ಹೊಸ ವರ್ಷವೋ ವಿಶೇಷವಾಗೋದು ಇದಕ್ಕೇ . ಈ ವರ್ಷ ಹೇಗಿತ್ತು ಎಂಬ ಯೋಚನೆಯೊಂದಿಗೆ , ಹೊಸ ವರ್ಷ ಹೇಗಿರಬೇಕು ಎಂಬ ಮತ್ತದೇ ನಿರೀಕ್ಷೆ . ಇದನ್ನು ಕುತೂಹಲ , ಅಶಾಭಾವ ಏನಾದರೂ ಅನ್ನಿ . ಹೊಸ ವರ್ಷಕ್ಕೆ ಯೋಜನೆ ಬೇಕಾ ? ಯೋಜನೆಯಿಲ್ಲದಿದ್ದರೆ ನಮ್ಮ ಜೀವನ ಅದೃಷ್ಟವನ್ನೇ ಅವಲಂಬಿಸಿರುತ್ತದೆ . ಹಗ್ಗದ ಮೇಲಿನ ನಡಿಗೆಗಿಂತ   ಮುಳ್ಳಿನ ದಾರಿಯೇ ಆದೀತಲ್ಲವೇ ? ಹೊಸ ವರ್ಷದಲ್ಲಿ ...

ನೆಟ್‌- ಒಂದು ಪರೀಕ್ಷೆ, ಹಲವು ಪ್ರಯೋಜನಗಳು

ಇಮೇಜ್
ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌) ಯನ್ನು ಭಾರತೀಯ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಲ್ಲಿ ʼಸಹಾಯಕ ಪ್ರಾಧ್ಯಾಪಕʼ ಮತ್ತು ʼಜೂನಿಯರ್‌ ರಿಸರ್ಚ್‌ ಫೆಲೋಶಿಪ್ ಮತ್ತು ಸಹಾಯಕ ಪ್ರಾಧ್ಯಾಪಕ' ಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ನಡೆಸಲಾಗುತ್ತದೆ.  ಯುಜಿಸಿ- ನೆಟ್‌ ಪರೀಕ್ಷೆಯನ್ನು ವರ್ಷದಲ್ಲಿ ಎರಡು ಬಾರಿ (ಜೂನ್‌ ಮತ್ತು ಡಿಸೆಂಬರ್‌) ನಡೆಸಲಾಗುತ್ತದೆ. 2018 ರವರೆಗೆ ನೆಟ್‌ ಪರೀಕ್ಷೆಯಲ್ಲಿ ಅಭ್ಯರ್ಥಿ ಮೂರು ಪೇಪರ್‌ಗಳಿಗೆ ಉತ್ತರಿಸಬೇಕಾಗಿತ್ತು. 2019 ರ ನಂತರ ಅದನ್ನು ಎರಡು ಪೇಪರ್‌ ಮಾಡಲಾಗಿದೆ. ಪರೀಕ್ಷೆಯಲ್ಲಿ ಎರಡೂ ಪೇಪರ್‌ಗಳು ವಸ್ತು ನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.  ನೆಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಡಿಸೆಂಬರ್ 2018 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್ನಲ್ಲಿ ನಡೆಸುತ್ತಿದೆ. ಎರಡು ಪರೀಕ್ಷೆಗಳನ್ನು ಮೂರು ಗಂಟೆಗಳ ಕಾಲ ನಡೆಸಲಾಗುತ್ತದೆ. ಪೇಪರ್‌ -1 ಮತ್ತು ಪೇಪರ್‌-2 ರ ನಡುವೆ ಯಾವುದೇ ವಿರಾಮ ಇರುವುದಿಲ್ಲ. ಮೂರು ಗಂಟೆಗಳ ಕಾಲ ಸತತವಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.  ಪೇಪರ್‌ -1 ಎಲ್ಲಾ ಅಭ್ಯರ್ಥಿಗಳಿಗೂ ಈ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಪೇಪರ್-1 ರಲ್ಲಿ ಸಾಮನ್ಯ ಜ್ಞಾನದ ಬಗ್ಗೆ ಹೆಚ್ಚು ಪ್ರಶ್ನೆಗಳನ್ನ ಕೇಳಲಾಗುತ್ತದೆ. ಅಭ್ಯರ್ಥಿಯ ಚಿಂತನೆ, ತಾರ್ಕಿಕತ...